ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರದ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಸುಳ್ಳು ಹೇಳುತ್ತಿದ್ದಾರೆ. ಬರ ಪರಿಹಾರದ ಹಣ ಬಿಡುಗಡೆ ಮಾಡದವರು ಮೊದಲು ರಾಜೀನಾಮೆ ನೀಡಿ ತೊಲಗಲಿ ಎಂದು ತಿರುಗೇಟು ನೀಡಿದರು.
ಬರ ಪರಿಹಾರ ಬಿಡುಗಡೆ ವಿಳಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಸದನಂದಗೌಡ, ಇವರೆಲ್ಲ ರಾಜೀನಾಮೆ ಕೊಟ್ಟ ಹೋಗಲಿ. ಕೇಂದ್ರದಿಂದ ನಾವೇ ಬರ ಪರಿಹಾರ ಬಿಡುಗಡೆ ಮಾಡಿಸಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದರು.
ಕೇಂದ್ರ ಸರಕಾರಕ್ಕೆ ಕೇವಲ ಮನವಿ ಸಲ್ಲಿಸಿ ಸುಮ್ಮನೆ ಕೂರುವುದಲ್ಲ. ಅದರ ಫಾಲೋಅಪ್ ಮಾಡಬೇಕು. ಪರಿಹಾರ ಬಂದಿಲ್ಲ ಎಂದು ಸುಮ್ಮನಿರೋದಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದ ತಕ್ಷಣ ದೆಹಲಿಗೆ ಹೋಗುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿಯಾಗಲಿ. ಇಲ್ಲೇ ಕುಳಿತುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದ್ದರು.