ಸಿಟಿ ರವಿ ಒನ್ ಆಫ್ ದಿ ರೌಡಿ‌ಶೀಟರ್- ಎಂ. ಲಕ್ಷ್ಮಣ್

ಬುಧವಾರ, 14 ಡಿಸೆಂಬರ್ 2022 (18:48 IST)
ಯಡಿಯೂರಪ್ಪ ಇಡಿ ಗನ್ ಪಾಯಿಂಟ್ ನಲ್ಲಿ ಇದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಕಡೆಗಣನೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಯಡಿಯೂರಪ್ಪ ಇಡಿ ಗನ್ ಪಾಯಿಂಟ್ ನಲ್ಲಿ ಇದ್ದಾರೆ. ಅವರು ಇಬ್ಬರು ಗನ್ ಮ್ಯಾನ್ ಗಳಲ್ಲಿ ಒಬ್ಬರು ಇಡಿ ಕಡೆಯವರು ಇದ್ದಾರೆ. ಆ ಇಡಿ ಅಧಿಕಾರಿ ಹೇಳಿದಂತೆ ಯಡಿಯೂರಪ್ಪ ಮಾತಾಡ್ತಾರೆ. ಯಡಿಯೂರಪ್ಪ ಎಲ್ಲೇ ಹೋದ್ರೂ ಹಿಂದೆನೇ ಇರ್ತಾರೆ.ಬೇಕಾದ್ರೆ ನಾನು ಅದನ್ನ ಆಧಾರ ಸಹಿತವಾಗಿ ತಿಳಿಸ್ತಿನಿ ಎಂದು ಆರೋಪಿಸಿದರು.ಇನ್ನೂ ಈ ವೇಳೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮೇಲೆ ಗಂಭೀರ ಆರೋಪ ಮಾಡಿದರು. ಸಿ.ಟಿ.ರವಿ ಚಿಕ್ಕಮಗಳೂರು ಶಾಸಕರು.ರಾಜ್ಯದಲ್ಲಿ‌ ದಿನನಿತ್ಯ ವಿವಾದಗಳನ್ನು ಹುಟ್ಟು ಹಾಕುವವರು. ಇವತ್ತು ಅವರ ಮೊದಲ‌ ಎಪಿಸೋಡ್ ರಿಲೀಸ್ ಮಾಡ್ತಿದ್ದೇವೆ.೧೯೯೦ ರಿಂದ ೯೬ ರವರೆಗೆ ಏನೂ ಇರಲಿಲ್ಲ.ಈ ವಾಸ್ ಒನ್ ಆಫ್ ದಿ ರೌಡಿ‌ಶೀಟರ್ ಟೌನ್ ಹಾಗೂ ರೂರಲ್ ಠಾಣೆಯಲ್ಲಿ ರೌಡಿ ಶೀಟರ್ ಇತ್ತು.ಇತ್ತೀಚೆಗೆ ಅದನ್ನ ತೆಗೆಸುವ ಪ್ರಯತ್ನ ಮಾಡಿದ್ದಾರೆ.ಈಗಲೂ ೪ ಕ್ರಿಮಿನಲ್ ಕೇಸ್ ಅವರ ಮೇಲಿದೆ. ಈ ಹಿನ್ನಲೆ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಎಲ್ಲಾ ಕಾಮಗಾರಿಗಳನ್ನು ಅವರ ಮಾವನಾದ ಹೆಚ್.ಪಿ.ಸುದರ್ಶನ್ ಅವರಿಗೆ ಟೆಂಡರ್ ಕೊಡಿಸುತ್ತಾರೆ. ಈ ಮೂಲಕ ಸಿಟಿ ರವಿ ಅವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹೆಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ