ಬಳ್ಳಾರಿ ಹೊಸಪೇಟೆಯ ತಾಲೂಕಿನ ಧರ್ಮಸಾಗರದಲ್ಲಿ ಮೂರು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಫೋಟಗೊಂಡಿದ್ದು, ಈಗ ನೀರಿನ ಟ್ಯಾಂಕ್, ಯಂತ್ರ ಪೀಸ್, ಪೀಸ್ ಆಗಿದ್ದು ಬಾಗಿಲುಗಳು ಹಾರಿಹೋಗಿವೆ.
ಇದರಿಂದ ಎಷ್ಟರಮಟ್ಟಿಗೆ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿರಬಹುದು ಎಂಬ ಶಂಕೆ ಉದ್ಭವಿಸಿದೆ. ಹನಿನೀರಿಗಾಗಿ ಜನರು ಪರದಾಡುವಂತ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಗಿತ್ತು. ಇದರಿಂದ ಜನರು ಸಂತಸ ವ್ಯಕ್ತಪಡಿಸಿದ್ದರು. ಈ ಭಾಗದ ಬೋರ್ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದರಿಂದ ಜನರು ಶುದ್ಧಕುಡಿಯುವ ನೀರು ಪೂರೈಕೆಯಾಗುತ್ತದೆಂದು ಸಂತಸಪಟ್ಟಿದ್ದರು.