ಸಿಎಂ ಸಿದ್ದರಾಮಯ್ಯರಿಂದ ಕೀಳುಮಟ್ಟದ ರಾಜಕಾರಣ: ಕುಮಾರಸ್ವಾಮಿ

ಮಂಗಳವಾರ, 25 ಜುಲೈ 2017 (16:23 IST)
ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆಗಾಗಿ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸುತ್ತಿರುವುದು ಕೀಳುಮಟ್ಟದ ರಾಜಕಾರಣವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
 
ಲಿಂಗಾಯುತರು ವೀರಶೈವರಲ್ಲ. ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆ ಮಾಡಲು ಹೊರಟಿದ್ದಾರೆ. ನಾಳೆ ಬೇರೆ ಬೇರೆ ಜಾತಿಯವರು ಕೂಡಾ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡಲು ಹೊರಟರೆ ಸಮಾಜವನ್ನು ಎಲ್ಲಿ ತಂದು ನಿಲ್ಲಿಸ್ತೀರಾ? ಎಂದು ಕಿಡಿಕಾರಿದರು.
 
ರಾಜ್ಯ ಬರಗಾಲದಿಂದ ತತ್ತರಿಸಿದೆ. ಪರಿಹಾರ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಸರಕಾರ ಧರ್ಮ ಪ್ರಚಾರದಲ್ಲಿ ತೊಡಗಿದೆ. ಧರ್ಮ ಪ್ರಚಾರಕ್ಕಾಗಿ ಸ್ವಾಮಿಜಿಗಳಿದ್ದಾರೆ ಅವರು ನೋಡಿಕೊಳ್ತಾರೆ. ನೀವು ಬರಗಾಲದತ್ತ ಗಮನಹರಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರಕಾರಕ್ಕೆ ಚಾಟಿ ಬೀಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ