ಮೌಡ್ಯಕ್ಕೆ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ

ಭಾನುವಾರ, 25 ಜೂನ್ 2023 (12:39 IST)
ವಾಸ್ತು ಸರಿ ಇಲ್ಲ ಎಂದು ಸಿಎಂ ಕಚೇರಿಯ ದಕ್ಷಿಣ ದ್ವಾರ ಕ್ಲೋಸ್ ಆಗಿತ್ತು.ಮುಚ್ಚಿದ ದ್ವಾರ ತೆರೆಸಿ ಕಚೇರಿಗೆ  ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ.
 
ಬಹುತೇಕ ಎಲ್ಲ ಸಿಎಂ ಪಶ್ಚಿಮದ್ವಾರದಿಂದಲೇ ಪ್ರವೇಶ ಪಡೆಯುತ್ತಿದ್ದಾರೆ.ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ದಕ್ಷಿಣ ದ್ವಾರದಿಂದ ಸಿಎಂ ಎಂಟ್ರಿ ಕೊಟ್ಟಿದ್ದಾರೆ.ದಕ್ಷಿಣ ದ್ವಾರ ವಾಸ್ತು ಸರಿ ಇಲ್ಲ ಎಂದು ಅಧಿಕಾರಿಗಳು ಮುಚ್ಚಿದ್ರು.ದಕ್ಷಿಣ ದ್ವಾರ ಯಾಕೆ ಮುಚ್ಚಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಕ್ಕೆ ವಾಸ್ತು ಕಾರಣ ಎಂದು ಅಧಿಕಾರಿಗಳು ಉತ್ತರಿಸಿದಾರೆ.ಅಧಿಕಾರಿಗಳು ಪ್ರತಿಕ್ರಿಯೆಗೆ ದಕ್ಷಿಣ ಭಾಗಿಲಿನಲ್ಲೆ ಸಿಎಂ ಸಿದ್ದರಾಮಯ್ಯ ಪ್ರವೇಶಿಸಲು ಮುಂದಾದ್ರು.ಸಿಎಂ ನಡೆಗೆ ಕಚೇರಿ ಒಳಗಿನಿಂದ ಬಾಗಿಲು ತೆರೆದು ಪ್ರವೇಶಕ್ಕೆ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ.ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಅಧಿಕಾರಿಗಳಿಗೆ ಸಿಎಂ  ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ