‘ನನ್ನ ಹೆಸರಲ್ಲೂ ರಾಮ ಇದ್ದಾನೆ, ನಾನೂ ಹಿಂದೂ’

ಶನಿವಾರ, 15 ಜುಲೈ 2017 (11:09 IST)
ಮೈಸೂರು: ಹಿಂದೂಗಳು ಬಿಜೆಪಿಯವರ ಸೊತ್ತಲ್ಲ. ನನ್ನ ಹೆಸರಲ್ಲೂ ‘ರಾಮ’ ಇದ್ದಾನೆ. ಅಂದರೆ ನಾನೂ ಹಿಂದೂ ಎಂದು ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ತಾವು ಹಿಂದೂ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಜೆಪಿಯವರು ಹಿಂದೂ ಹೆಸರು ಹೇಳಿಕೊಂಡು ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರಿಗೆ ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರಷ್ಟೆ ಎಂದು ಸಿಎಂ ಟೀಕಿಸಿದ್ದಾರೆ.

ಈ ನಡುವೆ ತಾವು ಮುಂಬರುವ ಚುನಾವಣೆಯಲ್ಲಿ ಶಾಸಕರಾಗಿಯೂ ಆಯ್ಕೆಯಾಗಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಸಿಎಂ ಸಿದ್ದು ತಿರುಗೇಟು ನೀಡಿದ್ದಾರೆ. ‘ಯಾರು ಯಾರಿದಂಲೂ ಶಾಸಕರಾಗಲ್ಲ. ಯಡಿಯೂರಪ್ಪ, ಕುಮಾರಸ್ವಾಮಿ ಹೇಳಿದ ಮಾತ್ರಕ್ಕೆ ಶಾಸಕರಾಗಲ್ಲ. ಜನ ತೀರ್ಮಾನ ಮಾಡುತ್ತಾರೆ’ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ.. ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ