ಮೋದಿ ಸರ್ಕಾರಕ್ಕೆ ರೈತರಿಗಿಂತ ಉದ್ಯಮಿಗಳೇ ಹೆಚ್ಚಾದರೇಕೆ? ಸಿಎಂ ಸಿದ್ದರಾಮಯ್ಯ ಟೀಕೆ

ಬುಧವಾರ, 18 ಏಪ್ರಿಲ್ 2018 (09:13 IST)
ಮೈಸೂರು: ಚುನಾವಣಾ ಪ್ರಚಾರದಲ್ಲಿರುವ ಸಿಎಂ ಸಿದ್ದರಾಮಯ್ಯ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

‘ಕೇಂದ್ರ ಸಚಿವರುಗಳು ಇಲ್ಲಿಗೆ ಬಂದು ನಾವು 22.5 ಲಕ್ಷ ರೈತರ ಸಾಲ ಮನ್ನಾ ಮಾಡಿರುವುದನ್ನು ಹಾಸ್ಯಾಸ್ಪದ ಎನ್ನುತ್ತಾರೆ. ಬಿಎಸ್ ವೈ ಹಹೇಳುತ್ತಾರೆ ನಾವು ನೋಟು ಪ್ರಿಂಟಿಗ್ ಮೆಷಿನ್ ಇಟ್ಟುಕೊಂಡಿಲ್ಲ ಅಂತ. ಹಾಗಿದ್ದರೂ ಪಿಎಸ್ ಬ್ಯಾಂಕ್ 2.7 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಹಾಗಿದ್ದರೆ ಮೋದಿ ಸರ್ಕಾರಕ್ಕೆ ರೈತರಿಗಿಂತ ಉದ್ಯಮಿಗಳೇ ಹೆಚ್ಚಾದರೇಕೆ?’ ಎಂದು ಸಿಎಂ ಟ್ವಿಟರ್ ಮೂಲಕ ಟೀಕಿಸಿದ್ದಾರೆ.

ಈ ಮೊದಲೂ ಸಿಎಂ ಸಿದ್ದರಾಮಯ್ಯ ಹಲವು ಬಾರಿ ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಕಾಲೆಳೆಯುತ್ತಲೇ ಇದ್ದರು. ಇದೀಗ ಮತ್ತೊಮ್ಮೆಅದೇ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ