ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿಯ ಬಂಪರ್ ಕೊಡುಗೆ....

ಶುಕ್ರವಾರ, 21 ಅಕ್ಟೋಬರ್ 2016 (18:39 IST)
ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿ ಬಂಪರ್ ಕೊಡುಗೆ ನೀಡಿದ್ದಾರೆ. 
 
ರಾಜ್ಯ ಸರಕಾರಿ ನೌಕರರಿಗೆ 4.2 ಪ್ರತಿಶತ ತುಟ್ಟಿಭತ್ಯೆ ಹೆಚ್ಚಳಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. 
 
ಜುಲೈ 1 ರಿಂದ ಅನ್ವಯವಾಗುವಂತೆ 4.2 ಪ್ರತಿಶತ ತುಟ್ಟಿಭತ್ಯೆ ಹೆಚ್ಚಳಗೊಳಿಸಿದ್ದು, ಸರಕಾರಿ ನೌಕರರಿಗಿದ್ದ 36 ಪ್ರತಿಶತ ತುಟ್ಟಿಭತ್ಯೆಯನ್ನು 40.25 ಪ್ರತಿಶತಕ್ಕೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. 
 
ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಸರಕಾರ ತುಟ್ಟಿಭತ್ಯೆ ಹೆಚ್ಚಳಗೊಳಿಸಿರುವುದು ಕೊಂಚ ಮಟ್ಟಿನ ನೆಮ್ಮದಿ ತಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ