'ನಾನು ಬೆಳ್ಳಿ ತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತೇ? ಮಾಧ್ಯಮದವರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ...?

ಸೋಮವಾರ, 1 ಜನವರಿ 2018 (14:19 IST)
Normal 0 false false false EN-US X-NONE X-NONE

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ‘ನಾನು ಬೆಳ್ಳಿತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತೆ? ಅದನ್ಯಾಕೆ ದೊಡ್ಡ ಸುದ್ದಿ ಮಾಡುತ್ತಿರಾ? ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ.
 

‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಮಾಧ್ಯಮದವರು ಸಮಾಜ ಹಾಗು ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದ ವಿಷಯಗಳನ್ನು ಪ್ರಸಾರ ಮಾಡಬೇಕು. ಗಂಡ- ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಅದನ್ನೆ ನೀವು ಸುದ್ದಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
 

ಮಾಧ್ಯಮಗಳು ಹಾಗು ಪತ್ರಕರ್ತರು ತನ್ನನ್ನು ಹಾಗು ತಮ್ಮ ಸರ್ಕಾರವನ್ನು ವಿಮರ್ಶೆ ಮಾಡಿದರೆ ತಮ್ಮ ಕಡೆಯಿಂದ ಯಾವ ವಿರೋಧವಿಲ್ಲ. ಆದರೆ ವಾಸ್ತವಿಕ ಚೌಕಟ್ಟಿನಲ್ಲಿ ಚರ್ಚೆ ಹಾಗು ವಿಮರ್ಶೆ ನಡೆದರೆ ತುಂಬಾ ಒಳ್ಳೆಯದು. ಯಾರೊ ಬೆಳ್ಳಿತಟ್ಟೆಯಲ್ಲಿ ಊಟ ಕೊಟ್ಟರು, ತಾನು  ಊಟ ಮಾಡಿದೆ. ಇದರಿಂದ ಸಮಾಜಕ್ಕೇನು ತೊಂದರೆಯಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ