ಸಿಎಂ ಯಡಿಯೂರಪ್ಪಗೆ ಹಾವು ಬೆನ್ನು ಹತ್ತಿದ್ಯಾಕೆ
ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹಾವಿನ ಕಾಟ ಶುರುವಾಗಿದೆಯಾ? ಇಂಥದ್ದೊಂದು ಅನುಮಾನಕ್ಕೆ ಇದೀಗ ಪುಷ್ಠಿ ನೀಡುವಂತ ಘಟನೆ ನಡೆದಿದೆ.
ಚೇತನಾ ಕಾಲೇಜ್ ಹತ್ತಿರದ ಮೈದಾನಲ್ಲಿ ಬೃಹತ್ ಆಕಾರದಲ್ಲಿ ಸ್ಟೇಜ್ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಟೇಬಲ್ ದಲ್ಲಿ ಕೆರೆ ಹಾವು ಕಂಡು ಬಂದಿದೆ. ಸ್ನೇಕ್ ಸಂಗಮೇಶ ಅವರನ್ನು ಕರೆಯಿಸಿ ಆ ಹಾವನ್ನು ಹಿಡಿಸಲಾಗಿದೆ. ಆ ಮೂಲಕ ಸಿಎಂಗೆ ಹಾವಿನ ಕಾಟ ಶುರುವಾಯಿತಾ ಅಂತ ಮಾತನಾಡಿಕೊಳ್ಳುತ್ತಿರೋದು, ಚರ್ಚೆ ನಡೆದಿರೋದು ಕಂಡುಬಂತು.