ಧಗಧಗನೆ ಹೊತ್ತಿ ಉರಿದ ತೆಂಗಿನ ಮರ: ಕಾರಣ?

ಭಾನುವಾರ, 24 ಫೆಬ್ರವರಿ 2019 (13:45 IST)
ಜನನಿಬಿಡ ಪ್ರದೇಶದಲ್ಲಿದ್ದ ತೆಂಗಿನ ಮರವೊಂದು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.

ವಿದ್ಯುತ್ ಸರ್ಕ್ಯೂಟ್ ನಿಂದ ತೆಂಗಿನ ಗಿಡಕ್ಕೆ ಬೆಂಕಿ ತಗುಲಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಘಟನೆ ನಡೆದಿದೆ. ಆನಂದ ಟಾಕಿಜ್ ಹತ್ತಿರದ ವಾಲ್ಮೀಕಿ ಕ್ರೀಡಾಂಗಣದ ಮುಂದೆ ಈ ಘಟನೆ ಸಂಭವಿಸಿದ್ದು, ವಿದ್ಯುತ್ ತಂತಿ ತೆಂಗಿನ ಗಿಡಕ್ಕೆ ತಗುಲಿ ಬೆಂಕಿ ಅನಾಹುತ ಸೃಷ್ಟಿಸಿತು.

ಬೆಂಕಿ ನಂದಿಸಲು ಅಗ್ನಿಶಾಮಕ ದಳ ಯಶಸ್ವಿ ಕಾರ್ಯಾಚರಣೆ ನಡೆಸಿತು. ಘಟನೆಯಿಂದ ಸುತ್ತಲಿನ ಜನರು ಕೆಲಕಾಲ ಆತಂಕದಲ್ಲಿದ್ದರು. ಗೋಕಾಕ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ