ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ನೇತೃತ್ವವಹಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ ಎಂದು ಪಕ್ಷ ಹಾಗೂ ರಾಜ್ಯದ ಜನತೆಯ ವತಿಯಿಂದ ಅಭಿನಂದಿಸಿದರು.
ಗಿಫ್ಟ್ ಅಂದ್ರೆ ಸಿಎಂ ಸಿದ್ದುಗೆ ಭಯವಂತೆ......
ಸಾರ್ಥಕ ಸಮಾವೇಶದಲ್ಲಿ ಬೆಳ್ಳಿ ಕಿರೀಟ್ ಹಾಗೂ ಗದೆ ಕೊಟ್ಟು ಕಾರ್ಯಕರ್ತರು ಸನ್ಮಾನಿಸಿದ ಹಿನ್ನೆಲೆಯಲ್ಲಿ ಬೆಳ್ಳಿ ಕಿರೀಟ್ ಹಾಗೂ ಗದೆ ಕಾರ್ಯಕರ್ತರಿಗೆ ಸಲ್ಲಬೇಕಾಗಿದ್ದು. ಕಾರ್ಯಕರ್ತರ ಮನಸ್ಸಿಗೆ ನೋವಾಗಬಾರದು ಎಂದು ಇವುಗಳನ್ನು ಸ್ವೀಕರಿಸಿದೆ. ಹ್ಯೂಬ್ರೆಟ್ ವಾಚ್ ಪ್ರಕರಣದ ನಂತರ ಗಿಫ್ಟ್ ತೆಗೆದುಕೊಳ್ಳಲು ಭಯವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.