ವಿಧಾನಪರಿಷತ್ 8 ಸದಸ್ಯರ ವಿರುದ್ಧ ಸಭಾಪತಿಗೆ ದೂರು

ಶನಿವಾರ, 20 ಮೇ 2017 (16:01 IST)
ಬೆಂಗಳೂರಿನ ನಿವಾಸಿಗಳು ಎಂದು ಹೇಳಿ ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸಿದ 8 ವಿಧಾನಪರಿಷತ್ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸಭಾಪತಿಯವರಿಗೆ ಒತ್ತಾಯಿಸಿದ್ದಾರೆ.
 
8 ಮಂದಿ ವಿಧಾನಪರಿಷತ್ ಸದಸ್ಯರು ಬೆಂಗಳೂರಿನ ನಿವಾಸಿಗಳು ಎಂದು ಹೇಳಿ ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸಿ ನಂತರ ಪ್ರಯಾಣ ಭತ್ಯೆ ಪಡೆದಿರುವುದು ಬಹಿರಂಗವಾಗಿದ್ದರಿಂದ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ
 
ಸಿ.ಆರ್.ಮನೋಹರ್, ಅಪ್ಪಾಜಿಗೌಡ, ಭೋಸರಾಜು, ಸೇರಿದಂತೆ ಒಟ್ಟು 6 ಜನ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರು ಇಬ್ಬರು ಜೆಡಿಎಸ್ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ