ಬಂದ್ ನಿಂದಾದ ನಷ್ಟವನ್ನು ವಾಟಾಳ್ ನಾಗರಾಜ್ ಪಾವತಿ ಮಾಡಬೇಕು!

ಗುರುವಾರ, 25 ಜನವರಿ 2018 (14:04 IST)
ಬೆಂಗಳೂರು: 10 ದಿನಗಳ ಅಂತರದಲ್ಲಿ ಎರಡೆರಡು ಬಂದ್ ಮಾಡಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಬಂದ್ ವಿರುದ್ಧ ರಾಜಾಜಿ ನಗರದ ಶ್ರದ್ಧಾ ಪೋಷಕರ ಸಂಘದಿಂದ ಹೈಕೋರ್ಟ್ ಗೆ ದೂರು ಸಲ್ಲಿಸಲಾಗಿದೆ.
 

ಬಂದ್ ವೇಳೆ ಹಿಂಸಾಚಾರ ನಡೆಯುತ್ತದೆ. ಕಲ್ಲು ತೂರಾಟ ಮಾಡಿ ಸಾರ್ವಜನಿಕ ವಸ್ತುಗಳಿಗೆ ಹಾನಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಜನ ಸಾಮಾನ್ಯರ ನಿತ್ಯದ ಬದುಕು ತೊಂದರೆಗೀಡಾಗುತ್ತದೆ.

10 ದಿನಗಳ ಅಂತರದಲ್ಲಿ ಎರಡು ಬಾರಿ ಬಂದ್ ಮಾಡಲು ಕರೆ ಕೊಟ್ಟಿರುವ ಕನ್ನಡ ನಾಡು ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಂದ್ ನಿಂದಾಗುವ ನಷ್ಟದ ಹಣ ಮರು ಪಾವತಿ ಮಾಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ