ಅಂಬೇಡ್ಕರ್ ಅನುಯಾಯಿ ಬಂಧನಕ್ಕೆ ಖಂಡನೆ

ಭಾನುವಾರ, 3 ಫೆಬ್ರವರಿ 2019 (20:22 IST)
ಅಂಬೇಡ್ಕರ್ ಅನುಯಾಯಿ ಹಾಗು ಹೋರಾಟಗಾರ ಆನಂದ್ ತೇಲ್ತುಂಬ್ಡೆಯನ್ನು ಬಂಧಿಸಿರುವ ಕ್ರಮ ವಿರೋಧಿಸಿ ದಲಿತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ಅಂಬೇಡ್ಕರ್ ಅನುಯಾಯಿ ಹಾಗು ಹೋರಾಟಗಾರರದ ಆನಂದ್ ತೇಲ್ತುಂಬ್ಡೆಯನ್ನು ಪುಣೆ ಪೋಲಿಸರು ಬಂಧಿಸಿರುವುದನ್ನು ವಿರೋಧಿಸಿ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ದಲಿತ ಸಂಘಟನೆಗಳು ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಮುಂದೆ ದಲಿತ ಸಂಘಟನೆಯವರು ಕಪ್ಪು ಪಟ್ಟಿ ಧರಿಸುವ ಮೂಲಕ ಧರಣಿ ನಡೆಸಿದರು.

ಕೇಂದ್ರ ಸರ್ಕಾರ ಹಾಗೂ ಆರ್ ಎಸ್ ಎಸ್ ನವರು ದಲಿತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಧಿಕ್ಕಾರ ಕೂಗಿದರು.  ಕೇಂದ್ರ ಸರ್ಕಾರ, ಆರ್ ಎಸ್ ಎಸ್ ನವರು ಶಡ್ಯಂತ್ರ ರೂಪಿಸುವ ಮೂಲಕ ಪುಣೆ ಪೋಲಿಸರು ಆನಂದ್ ಅವರನ್ನು ಬಂಧಿಸಿದ್ದಾರೆ ಎಂದು ದೂರಿದ್ದು, ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ