ಶರತ್​ ಬಚ್ಚೇಗೌಡ ವಿರುದ್ಧ ‘ಕನ್ಫೂಸ್​​’ತಂತ್ರ

ಮಂಗಳವಾರ, 25 ಏಪ್ರಿಲ್ 2023 (19:54 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ರಾಜಕೀಯ ತಂತ್ರ ಪ್ರಯೋಗಿಸಲಾಗುತ್ತಿದೆ.. ಶರತ್​​​​ ಕುಮಾರ್​​​​​ ಬಚ್ಚೇಗೌಡ ಎಂಬ ಹೆಸರಿನ ವ್ಯಕ್ತಿ ಸಹ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದು, ಕುಕ್ಕರ್ ಚಿಹ್ನೆ ವಿತರಣೆ ಮಾಡಲಾಗಿದೆ. ಕಳೆದ 2019ರ ಉಪಚುನಾವಣೆಯಲ್ಲಿ ಶರತ್​​ ಬಚ್ಚೇಗೌಡ ಪಕ್ಚೇತರರಾಗಿ ಕುಕ್ಕರ್ ಚಿಹ್ನೆ ಪಡೆದು ಸ್ಪರ್ಧಿಸಿದ್ರು.. ಈ ಬಾರಿ ಮತದಾರರನ್ನು ದಾರಿ ತಪ್ಪಿಸಲು ಶರತ್​​​​ ಕುಮಾರ್​​​​​ ಬಚ್ಚೇಗೌಡ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಹೊಸಕೋಟೆಯಲ್ಲಿ ಈಗ ಬಿಜೆಪಿ ಅಭ್ಯರ್ಥಿ, ಸಚಿವ ಎಂಟಿಬಿ ನಾಗರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ನಡುವೆ ನೇರ ಪೈಪೋಟಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ