ಕಾಂಗ್ರೆಸ್ ಟೀಕಿಸಿದ ಎಸ್.ಎಂ. ಕೃಷ್ಣಗೆ ಟಾಂಗ್ ನೀಡಿದ ಇಬ್ರಾಹಿಂ, ಕಾಗೋಡು ತಿಮ್ಮಪ್ಪ

ಮಂಗಳವಾರ, 4 ಏಪ್ರಿಲ್ 2017 (16:42 IST)
ಬಿಜೆಪಿ ಸೇರ್ಪಡೆಗೊಂಡ ಬಳಿಕ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಪುಂಖಾನುಪುಂಖವಾಗಿ ಕಾಂಗ್ರೆಸ್ ಪಕ್ಷವನ್ನ ಟೀಕಿಸುತ್ತಿರುವುದಕ್ಕೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

35 ವರ್ಷಕ್ಕೆ ಮದುವೆಯಾಗಬಹುದು 85 ವರ್ಷಕ್ಕೆ ಮದುವೆಯಾಗಬಾರದು. ಮನೆಯ ಯಜಮಾನ ಕಿರಿಯರಿಗೆ ಮದುವೆಮಾಡಬೇಕು. ಅದನ್ನ ಬಿಟ್ಟು ತಾನೇ ಮದುವೆಯಾಗಲು ಹೊಡಬಾರದು ಎಂದು ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಇತ್ತ, ಕೋಲಾರದ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಕೃಷ್ಣ ನೀಡಿದ್ದ ಹೇಳಿಕೆ ಬಗ್ಗೆ ಕಿಡಿ ಕಾರಿದ್ದಾರೆ. ತೀಟೆ ತೀರಿಸಿಕೊಳ್ಳಲು ಹೇಳಿಕೆ ನೀಡಬಾರದು. ಪಕ್ಷದಿಂದ ಎಲ್ಲ ಸ್ಥಾನಮಾನವನ್ನ ಅನುಭವಿಸಿ ಈಗ ಪಕ್ಷ ಬಿಟ್ಟು ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ