ಕಾಂಗ್ರೆಸ್ ಎಂಎಲ್ ಸಿ ಬಸವರಾಜ ಪಾಟೀಲ್ ಇಟಗಿ ಪುತ್ರ ಸೇರಿ ಇಬ್ಬರ ವಿರುದ್ಧ ಎಫ್ ಐಆರ್ ದಾಖಲು

ಮಂಗಳವಾರ, 2 ಮಾರ್ಚ್ 2021 (11:01 IST)
ಬೆಂಗಳೂರು : ಕಾಂಗ್ರೆಸ್ ಎಂಎಲ್ ಸಿ ಬಸವರಾಜ ಪಾಟೀಲ್ ಇಟಗಿ ಪುತ್ರ ಸೇರಿ ಇಬ್ಬರ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಎಂಎಲ್ ಸಿ ಬಸವರಾಜ ಪಾಟೀಲ್ ಇಟಗಿ ಪುತ್ರ ಸುಮನ್ ಮತ್ತು ಟಿಪ್ಪರ್ ಚಾಲಕ ಶ್ರೀನಿವಾಸ್ ವಿರುದ್ಧ ಎಫ್ ಐಆರ್ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಟಿಪ್ಪರ್ ಚಾಲಕ ಶ್ರೀನಿವಾಸ್  ಮರಳು ತುಂಬಿದ್ದ ಲಾರಿಯನ್ನು ಶರಣಗೌಡ ತಡೆದಿದ್ದ. ಹೀಗಾಗಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಬಳಿ ಶರಣಗೌಡ ಹತ್ಯೆಗೆ ಯತ್ನಿಸಲಾಗಿದೆ, ಕೊಲೆಗೆ ಯತ್ನಿಸಿ ಸುಮನ್ , ಶ್ರೀನಿವಾಸ್ ಪರಾರಿಯಾಗಿದ್ದಾರೆ. ಪರಾರಿಯಾಗಿದ್ದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ