ಸರ್ಕಾರದ ವ್ಯವಸ್ಥೆ ಕುರಿತು ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿ

ಗುರುವಾರ, 28 ಜುಲೈ 2022 (19:49 IST)
congress
ಸರ್ಕಾರದ ವ್ಯವಸ್ಥೆ ಕುರಿತು ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.ಪ್ರತಿಬಾರಿಯೂ ಯುವಕರ ಹತ್ಯೆಯ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರದ ಹೇಳಿಕೆ ವಿರುದ್ದ ಕಾಂಗ್ರೇಸ್ ವ್ಯಂಗ್ಯವಾಡಿದೆ.ಬಿಜೆಪಿ ಸರ್ಕಾರದ 'ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂಬ ಮಾತಿನ ಅಸಲಿ ಅರ್ಥ ಇದು .ಜೈಲಿನಲ್ಲಿ ಗಾಂಜಾ ವ್ಯವಸ್ಥೆ ಮಾಡುತ್ತೇವೆ.ಮೊಬೈಲ್ ನೀಡುತ್ತೇವೆ.ಬಿರಿಯಾನಿ ನೀಡುತ್ತೇವೆ.ಮೋಜು ಮಸ್ತಿಗೆ ಸುವ್ಯವಸ್ಥೆ ಮಾಡಿಕೊಡುತ್ತೇವೆ. ಎಂದು ಬಿಜೆಪಿ ಹೇಳ್ತಿತ್ತು. ಇದೀಗ  ಸರ್ಕಾರದ ಅಸಾಮರ್ಥ್ಯವನ್ನು ಸ್ವತಃ ಅವರ ಕಾರ್ಯಕರ್ತರೇ ಅರ್ಥ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಟ್ಟುವಾಗಿ ಟೀಕಿಸಿದೆ.ಇನ್ನು ಅಷ್ಟೇ ಅಲ್ಲದೇ  ಜನಾಕ್ರೋಶ ಎಂಬ  ಹ್ಯಾಶ್ ಟ್ಯಾಗ್ ಬಳಸಿ ಕಾಂಗ್ರೆಸ್ ಟ್ವೀಟ್ ನಲ್ಲಿ ಅಕ್ರೋಶ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ