ಮುಂದುವರೆದ ಸಿಎಂ ಬೊಮ್ಮಾಯಿ‌ ರಾಜ್ಯ ಪ್ರವಾಸ

ಮಂಗಳವಾರ, 18 ಅಕ್ಟೋಬರ್ 2022 (14:40 IST)
ಇಂದು ಮತ್ತು ನಾಳೆ ಬೀದರ್,ಕಲ್ಬುರ್ಗಿ ಪ್ರವಾಸಕ್ಕೆ ಸಿಎಂ ಬೊಮ್ಮಾಯಿ‌ ತೆರಳಲಿದ್ದಾರೆ.ಇಂದು ಬೆಳಗ್ಗೆ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೀದರ್‌ಗೆ  ಸಿಎಂ ಬೊಮ್ಮಾಯಿ‌ ತೆರಳಿದ್ದಾರೆ.ಬೀದರ್‌ನ ಹುಮ್ನಾಬಾದ್,ಔರದ್ ಜನಸಂಕಲ್ಪಯಾತ್ರೆಯಲ್ಲಿ  ಸಿಎಂ ಬೊಮ್ಮಾಯಿ‌ ಭಾಗಿಯಾಗಲಿದ್ದಾರೆ.ಇಂದು ಒಂಟಿಯಾಗಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ ಭಾಗಿಯಾಗಲಿದ್ದಾರೆ.ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನೆಲೆ ಬಿಎಸ್‌ವೈ ಅನುಪಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ‌ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
 
ಬೀದರ್ ಪ್ರವಾಸ ಮುಗಿಸಿ ಸಂಜೆ ಬೆಂಗಳೂರಿಗೆ  ಸಿಎಂ ಬಸವರಾಜ್  ಬೊಮ್ಮಾಯಿ ವಾಪಸ್ಸಾಗಲಿದ್ದಾರೆ.ಬುಧವಾರ ಬೆಳಗ್ಗೆ 9.30 ಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಕಲ್ಬುರ್ಗಿಗೆ ಸಿಎಂ ಪ್ರಯಾಣ ಮಾಡಲಿದ್ದಾರೆ.ಹುಣಸಗಿ,ಕಮಲಾಪುರದಲ್ಲಿ ಸಮಾವೇಶದಲ್ಲಿ  ಸಿಎಂ ಬೊಮ್ಮಾಯಿ‌ ಭಾಗಿಯಾಗಲಿದ್ದಾರೆ.ಬುಧವಾರ ಸಂಜೆ 7 ಗಂಟೆಗೆ ಬೆಂಗಳೂರಿಗೆ ಸಿಎಂ ಬೊಮ್ಮಾಯಿ‌ ಮತ್ತೆ ವಾಪಸ್ ಆಗಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ