ಕೊರೊನಾ ನಿಯಂತ್ರಣ ಕಾರ್ಯ 1 ವರ್ಷದ ವೇತನ ನೀಡಿದ ಸಿಎಂ

ಬುಧವಾರ, 1 ಏಪ್ರಿಲ್ 2020 (10:23 IST)
ಬೆಂಗಳೂರು : ಕೊರೊನಾ ನಿಯಂತ್ರಣ ಕಾರ್ಯಕ್ಕೆ ತನ್ನ ಒಂದು ವರ್ಷದ ವೇತನ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಪರಿಹಾರ ನಿಧಿಗೆ ವೇತನ ನೀಡುವುದಾಗಿ ಬಿಎಸ್ ವೈ ಹೇಳಿದ್ದಾರೆ. ಹಾಗೇ ಸಚಿವರು, ಶಾಸಕರು, ಸಂಸದರು ಅಧಿಕಾರಿಗಳಿಗೂ ತಮ್ಮ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

 

ಹಾಗೇ ಕೊರೊನಾ ತಡೆಗೆ 14 ದಿನ ಲಾಕ್ ಡೌನ್ ನಿಯಮ ಪಾಲನೆ ಕಡ್ಡಾಯ. ಯಾರೂ ಮನೆಯಿಂದ ಹೊರಬರದಂತೆ ಎಚ್ಚರ ವಹಿಸಬೇಕು. ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುವಂತೆ ಟ್ವೀಟರ್ ನಲ್ಲಿ ಸಿಎಂ ಮನವಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ