ವೈಕುಂಠ ಏಕಾದಶಿಗೆ ಕೋವಿಡ್ ರೂಲ್ಸ್

ಮಂಗಳವಾರ, 11 ಜನವರಿ 2022 (17:16 IST)
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ನಗರದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಹಲವು ನಿಯಂತ್ರಣ ಕ್ರಮಗಳ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
 
ಜನರು ಕೋವಿಡ್ ನಿಯಂತ್ರಣಕ್ಕಾಗಿ ಕೊರೋನಾ ಮಾರ್ಗಸೂಚಿ ಅನುಸರಿಸಬೇಕು. ಮಾಸ್ಕ್, ಸಾಮಾಜಿಕ ಅಂತರವನ್ನು, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಕ್ರಮಗಳನ್ನು ಪಾಲಿಸಬೇಕು ಎಂಬುದಾಗಿ ಮನವಿ ಮಾಡಿದರು.
ವೈಕುಂಠ ಏಕಾದಶಿಗೆ ದೇವಸ್ಥಾನಕ್ಕೆ ನಿರ್ಬಂಧ ಕುರಿತಂತೆ ಪ್ರತಿಕ್ರಿಯಿಸಿದಂತ ಅವರು, ವೈಕುಂಠ ಏಕಾದಶಿಯಂದು ಕೋವಿಡ್ ಕಠಿಣ ನಿಮಯಗಳು ಜಾರಿಯಲ್ಲಿರಲಿವೆ. ಕೇವಲ ದೇವಸ್ಥಾನಗಳಿಗೆ 50 ಜನರು ಭೇಟಿ ನೀಡೋದಕ್ಕೆ ಅವಕಾಶ ನೀಡುವಂತ ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ