ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದವರಿಗೆ ಕಾದಿತ್ತು ಶಾಕ್!

ಬುಧವಾರ, 17 ಮೇ 2017 (09:14 IST)
ಬಾಗಲಕೋಟೆ: ದೇವರು ಎಲ್ಲರಿಗೂ ಸಮಾನನಲ್ಲವೇ? ಅವನಿಗೆ ಮನುಷ್ಯ, ಪ್ರಾಣಿ ಎಂಬ ಬೇಧವಿದೆಯೇ? ಹಾಗಾಗಿ ಮೊಸಳೆಯೊಂದು ತನ್ನ ಕಷ್ಟ ಹೇಳಿಕೊಳ್ಳಲು ನೇರವಾಗಿ ಗರ್ಭಗುಡಿಗೆ ಬಂದಿತ್ತು!

 
ಇಂತಹ ಘಟನೆ ನಡೆದಿದ್ದು ಬೀಳಗಿಯ ಹನುಮಂತನ ದೇವಾಲಯದಲ್ಲಿ. ಬೆಳ್ಳಂ ಬೆಳಗ್ಗೆ ಆಂಜನೇಯನ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಫುಲ್ ಶಾಕ್! ಗರ್ಭಗುಡಿಯಲ್ಲಿ ಹನುಮಂತನ ಜತೆಗೆ ಮೊಸಳೆರಾಯನ ದರ್ಶನವಾಯಿತು.

ಮೊಸಳೆಯನ್ನು ಕಂಡ ಗ್ರಾಮಸ್ಥರು ಅದನ್ನು ಹಿಡಿದು ಅರಣ್ಯಾಧಿಕಾರಿಗಳ ಕೈಗೊಪ್ಪಿಸಿದ್ದಾರೆ. ದೈತ್ಯ ಗಾತ್ರದ ಮೊಸಳೆ ಒಂದು ಕ್ವಿಂಟಾಲ್ ಗಿಂತಲೂ ಹೆಚ್ಚು ಭಾರವಿತ್ತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ