ಭಿನ್ನಮತಿಯರಿಗೆ ಹಣದ ಆಮಿಷ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ವಾಗ್ದಾಳಿ

ಮಂಗಳವಾರ, 26 ಜುಲೈ 2016 (18:13 IST)
ಜೆಡಿಎಸ್ ಭಿನ್ನಮತಿಯ ಶಾಸಕರಿಗೆ ಹಣದ ಆಮಿಷ ನೀಡಿರುವ ವಿಚಾರವಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ದೆ ಬರುವುದಿಲ್ಲ ಎಂದು ಕಾಣಿಸುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ರೆ ಬರುವುದಿಲ್ಲ ಎಂದು ಕಾಣಿಸುತ್ತದೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬಂತೆ ಅವರ ಬುದ್ದಿ ಎಂದು ಲೇವಡಿ ಮಾಡಿದರು. 
 
ಕುಮಾರಸ್ವಾಮಿ ಅವರು ಒಬ್ಬ ನಿರ್ಮಾಪಕ, ನಿರ್ದೇಶಕ ಬಣ್ಣ ಹಚ್ಚುವವರು 8 ನಂಬರ್ ಅಂದ್ರೆ ಅವರಿಗೆ ಯಾಕೆ ಕೋಪ ಬರುತ್ತೆ ಗೊತ್ತಿಲ್ಲ. ಆದರೆ, ನನಗೆ 12 ಹಾಗೂ 16 ನಂಬರ್ ಅಂದ್ರೆ ಬಲು ಇಷ್ಟ. ನನ್ನ ಜೊತೆ ಜೆಡಿಎಸ್‌ ಪಕ್ಷದ 24 ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ನನ್ನ ಆತ್ಮೀಯ ಸ್ನೇಹಿತರು. ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣನವರು ಸಹ ನನ್ನ ಆತ್ಮೀಯ ಸ್ನೇಹಿತರು ಎಂದು ತಿಳಿಸಿದರು.
 
ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಎಂದು ಕಾಣುತ್ತದೆ. ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ರೆಯೇ ಬರುವುದಿಲ್ಲ ಎಂದು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ