ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ನ್ಯಾಯಕ್ಕಾಗಿ ಕಣ್ಣೀರಿಟ್ಟ ದಲಿತ ಮಹಿಳೆ

ಶುಕ್ರವಾರ, 30 ನವೆಂಬರ್ 2018 (17:27 IST)
ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ನ್ಯಾಯಕ್ಕಾಗಿ ದಲಿತ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚೆಟ್ಟೆಹಳ್ಳಿ ಗ್ರಾಮದ ಮಹಿಳೆ ನ್ಯಾಯಕ್ಕಾಗಿ ಅಧಿಕಾರಿಗಳ ಮೊರೆ ಹೋಗಿದ್ದಾಳೆ. ಚೆಟ್ಟಿಹಳ್ಳಿ ಗ್ರಾಮದ ಆದಿಲಕ್ಷ್ಮಮ್ಮ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಮಹಿಳೆಯಾಗಿದ್ದಾರೆ.
ಉಳುಮೆ ಮಾಡುತ್ತಿದ್ದ ಜಮೀನು ಕಿತ್ತುಕೊಂಡಿದ್ದಾರೆ ಎಂದು ಆಕ್ರಂದನ ಹೊರಹಾಕಿದ್ದಾಳೆ.  

ಕೊರಟಗೆರೆ ನಗರಸಭೆ ಸಭಾಂಗಣದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ನಿಗ್ರಹದಳದ ಸಭೆಯಲ್ಲಿ ಈ ಘಟನೆ ನಡೆದಿದೆ.  
ಆಕ್ರಂದನ ಮುಗಿಲು ಮುಟ್ಟಿದರು ಕ್ಯಾರೆ ಅನ್ನದ ಅಧಿಕಾರಿಗಳ ಕ್ರಮದ ವಿರುದ್ಧ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ