ಶವವೂ ಅದಲಿ ಬದಲಿ ಆಗ್ಹೋಯ್ತು!

ಗುರುವಾರ, 23 ನವೆಂಬರ್ 2017 (12:28 IST)
ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಬೇಜಾವಾಬ್ದಾರಿಯಿಂದ  ಶವವನ್ನು ಅದಲು ಬದಲಾಗಿ ಹಸ್ತಾಂತರಿಸಿದ ಘಟನೆ ನಡೆದಿದೆ.

ನಮ್ಮ ಜನಕ್ಕೆ ಎಲ್ಲದರಲ್ಲೂ ಗಡಿಬಡಿ ಜಾಸ್ತಿ ಹಾಗಾಗಿ ಶವವನ್ನು ಸರಿಯಾಗಿ ನೋಡದೇ ಅದಲಿ-ಬದಲಿ ಮಾಡಿಕೊಟ್ಟಿದ್ದಾರೆ. ವಿಷ ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಂಚಮ್ಮ (60) ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ರಾತ್ರಿ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕೆಂಚಮ್ಮನ ಶವದ ಪಕ್ಕ ಯುವತಿ ಶಿಲ್ಪಾ ಶವ ಕೂಡ ಇತ್ತು. ಹಾಗಾಗಿ ಕೆಂಚಮ್ಮನ ಶವವನ್ನು ಯುವತಿಯ ಮನೆಯವರಿಗೆ ಕಳುಹಿಸಿದ್ದಾರೆ ಈ ಸಿಬ್ಬಂದಿಗಳು!


ಯುವತಿಯ ಮನೆಯವರು ವೃದ್ಧೆಯ ಶವಕ್ಕೆ ಈಗಾಗಲೇ ಅಂತ್ಯಕ್ರೀಯೆ ನಡೆಸಿದ್ದ ಕಾರಣ ವೃದ್ಧೆಯ ಮನೆಯವರು ದುಃಖತೃಪ್ತರಾಗಿದ್ದಾರೆ. ಇದರ ಕುರಿತು ಸಂಬಂಧಿಕರು ಡಾ. ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ