ಅಸಹಜ ಸಾವಿನ ಶಂಕೆ: ಮೃತದೇಹ ಹೊರತೆಗೆದು ಶವಪರೀಕ್ಷೆ

ಶನಿವಾರ, 12 ಮಾರ್ಚ್ 2022 (08:55 IST)
ಮೈಸೂರು: ಅಸಹಜ ಸಾವಿನ ಶಂಕೆಯಿಂದ ಹೂತಿಟ್ಟ ವ್ಯಕ್ತಿಯ ಶವವನ್ನು ಮರಳಿ ಹೊರತೆಗೆದು ತಹಶೀಲ್ದಾರ್ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ.

ವಿನೋದ್ ಎಂಬ ವ್ಯಕ್ತಿ ಕೆಲವು ದಿನಗಳ ಮೊದಲು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾಗಿ ಅವರ ಪತ್ನಿ ಮನೆಯವರಿಗೂ ಹೇಳದೇ ಅಂತ್ಯ ಸಂಸ್ಕಾರ ಮಾಡಿದ್ದರು.

ಆದರೆ ತಮ್ಮ ಮಗನ ಸಾವಿನಲ್ಲಿ ಸೊಸೆ ಕೈವಾಡವಿದೆಯೆಂದು ಅನುಮಾನಿಸಿ ವಿನೋದ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ಶವವನ್ನು ಮರಳಿ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದೆ. ವರದಿ ಬಳಿಕ ನಿಜಾಂಶ ಬಯಲಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ