ಅವರೋಹಣ ಮಾಡದ ಧ್ವಜ: ಗ್ರಾಮಸ್ಥರ ಆಕ್ರೋಶ

ಸೋಮವಾರ, 28 ಜನವರಿ 2019 (18:02 IST)
ಗಣರಾಜ್ಯೋತ್ಸವ ದಿನಕಳೆದರೂ ಧ್ವಜ ಕಂಬದಿಂದ ಧ್ವಜವನ್ನು ಇಳಿಸದ ಘಟನೆ ನಡೆದಿದೆ. 
 
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಲಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ಧ್ವಜಾರೋಹಣವನ್ನು ಅಲ್ಲಿನ ಸಿಬ್ಬಂದಿ ನೆರವೇರಿಸಿದ್ದರು. ಆದರೆ ಆ ಬಳಿಕ ಅಲ್ಲಿನ ಸಿಬ್ಬಂದಿಯೇ ಪತ್ತೆಯಾಗಿದ್ದಾರೆ.

ಧ್ವಜ ಇಳಿಸಬೇಕಾದ ಸಮಯ ಮುಗಿದರೂ ಸಿಬ್ಬಂದಿ ಧ್ವಜವನ್ನು ಕೆಳಕ್ಕೆ ಇಳಿಸಿಲ್ಲ. ಮರುದಿನವೂ ರಾಷ್ಟ್ರಧ್ವಜ ಹಾರಾಟ ನಡೆಸುತ್ತಿದೆ. ಹೀಗಾಗಿ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ