ತಾಯಿ ಗೌರಮ್ಮ ಪರವಾಗಿ ಸಿಎಂ ಕ್ಷಮೆಯಾಚಿಸಿದ ಡಿ.ಕೆ.ಶಿವಕುಮಾರ್

ಶನಿವಾರ, 5 ಆಗಸ್ಟ್ 2017 (18:31 IST)
ಐಟಿ ದಾಳಿಯ ಕುರಿತಂತೆ ವಾಗ್ದಾಳಿ ನಡೆಸಿದ್ದ ತಾಯಿ ಗೌರಮ್ಮ ಪರವಾಗಿ ಸಿಎಂ ಸಿದ್ದರಾಮಯ್ಯ ಅವರ ಕ್ಷಮೆಯಾಚಿಸುವುದಾಗಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ಪುತ್ರನ ನಿವಾಸದ ಮೇಲೆ ನಡೆದ ಐಟಿ ದಾಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ಕಾರಣರಾಗಿದ್ದಾರೆ ಎಂದು ಗೌರಮ್ಮ ಆರೋಪಿಸಿದ್ದರು.
 
ನಿನ್ನೆ ಸಂಸದ ಡಿ.ಕೆ.ಸುರೇಶ್, ತಾಯಿ ಗೌರಮ್ಮರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಗೊಂದಲದಿಂದಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದರು, 
 
ಇಂದು ಬಹಿರಂಗ ಪ್ರಕಟಣೆ ಹೊರಡಿಸಿರುವ ಸಚಿವ .ಡಿ.ಕೆ.ಶಿವಕುಮಾರ್, ತಾಯಿ ಗೌರಮ್ಮರ ಪರವಾಗಿ ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ