ಡಿಕೆಶಿ ಗೆ ವಿನಾಶಕಾಲೇ ವಿಪರೀತ ಬುದ್ದಿ-ವಿಜಯೇಂದ್ರ

geetha

ಸೋಮವಾರ, 8 ಜನವರಿ 2024 (15:00 IST)
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಭೆಕೋರರನ್ನು ನಿರಪರಾಧಿಗಳು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದು,ಡಿಕೆಶಿ ಗೆ ವಿನಾಶಕಾಲೇ ವಿಪರೀತ ಬುದ್ದಿ.ರಾಮಮಂದಿರ ಉದ್ಘಾಟನೆ ಆಗುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ರ ಓಲೈಕೆ ಮಾಡ್ತಾ ಇದೆ.ಬಿಜೆಪಿ ಏನೂ ಅಲ್ಪಸಂಖ್ಯಾತ ರ ವಿರೋದಿ ಅಲ್ಲ.ತ್ರಿವಳಿ ತಲಾಖ್ ತೆಗೆದುಹಾಕಿದ್ದು ಮೋದಿ ಸರ್ಕಾರ.

ಪೋಲೀಸ್ ಸ್ಟೇಷನ್ ಗೆ ನುಗ್ಗಿ ಬೆಂಕಿ ಹಚ್ಚಿದವರನ್ನು ನಿರಪರಾಧಿ ಅಂತೀರಾ?ಈ ಮೂಲಕ ಬೇರೆಯವರಿಗೆ ಪ್ರಚೋದನೆ ಕೊಡುವ ಕೆಲಸ ಕಾಂಗ್ರೆಸ್ ಮಾಡ್ತಾ ಇದೆ.ಜನಪರ ಕೆಲಸ ಮಾಡಿ ಅಂದ್ರೆ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡ್ತಾ ಇದೀರಾ?ಇದನ್ನು ರಾಜ್ಯದ ಜನತೆ ಗಮನಿಸ್ತಾ ಇದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ