ಸಿದ್ದರಾಮಯ್ಯ ಮೇಲೆ ತಾಯಿ ಗೌರಮ್ಮ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ. ಸುರೇಶ್

ಶುಕ್ರವಾರ, 4 ಆಗಸ್ಟ್ 2017 (19:25 IST)
ಸಿಎಂ ಸಿದ್ದರಾಮಯ್ಯ ವಿರುದ್ಧ ತಾಯಿ ಗೌರಮ್ಮ ಮಾಡಿದ್ದ ಆರೋಪದ ಕುರಿತಂತೆ ಸಂಸದ ಡಿ.ಕೆ. ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ಐಟಿ ದಾಳಿಗೆ ಅಮತ್ ಶಾ, ನರೇಂದ್ರಮೋದಿ ಕಾರಣ ಎಂದು ಹೇಳಲು ಹೋಗಿ ಕನ್ ಫ್ಯೂಸ್ ಆಗಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಮಧ್ಯಾಹ್ನ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ತೆರಳಿ ಭೇಟಿಯಾದ ಬಳಿಕ ಮಾತನಾಡಿದ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಅವರ ಆರೋಗ್ಯ  ಉತ್ತಮವಾಗಿದೆ. ಅಣ್ಣನ ಆರೋಗ್ಯ ಏರುಪೇರಾಗಿದ್ದರಿಂದ ಆತಂಕವಾಗಿತ್ತು. ವೈದ್ಯರು ಬಂದು ಪರೀಕ್ಷೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಒತ್ತಡದಿಂದ ಐಟಿ ಇಲಾಖೆ ಈ ದಾಳಿ ನಡೆಸುತ್ತಿದೆ ಎಂದು ಸುರೇಶ್ ಆರೋಪಿಸಿದ್ದಾರೆ.

ಇತ್ತ, ಡಿಕೆಶಿಯವರನ್ನ ತಪಾಸಣೆ ನಡೆಸಿದ ಫ್ಯಾಮಿಲಿ ಡಾಕ್ಟರ್ ರಮಣ್ ರಾವ್, ಬಿಪಿ ವ್ಯತ್ಯಾಸದಿಂದ ಆರೋಗ್ಯ ಏರುಪೇರಾಗಿದೆ. ಸರಿಯಾದ ವಿಶ್ರಾಂತಿಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ