ನಾಗಾಲ್ಯಾಂಡ್ ರಾಜ್ಯಪಾಲ ರಾಜ್ಯದಲ್ಲಿ ಮಾಡಿದ್ದೇನು ಗೊತ್ತಾ?

ಗುರುವಾರ, 27 ಡಿಸೆಂಬರ್ 2018 (16:35 IST)
ನಾಗಾಲ್ಯಾಂಡ್ ರಾಜ್ಯದ ರಾಜ್ಯಪಾಲ ರಾಜ್ಯಕ್ಕೆ ಭೇಟಿ ನೀಡಿದ್ದರು.

ನಾಗಾಲ್ಯಾಂಡ್ ರಾಜ್ಯದ ರಾಜ್ಯಪಾಲ ಪದ್ಮನಾಭ ಆಚಾರ್ಯ ಮಂಗಳೂರು ನಗರದ ಉರ್ವಾ ಮಾರ್ಕೆಟ್ ಬಳಿ ವಿವಿಧ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು. ಭಾರತ ದೇಶ ವಿಶ್ವದಲ್ಲಿ ಹೆಸರು ಪಡೆದುಕೊಳ್ಳುತ್ತಿದೆ.

ಉತ್ತಮ ಶಿಕ್ಷಣ ಪಡೆಯುದರ  ಮೂಲಕ ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬೇಕು. ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು  ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಾವು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ಇದೇ ವೇಳೆ  ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರ ಪತ್ನಿ  ಕವಿತಾ ಆಚಾರ್ಯ ಹಾಡಿದ ಭಜನೆ ಜನರನ್ನು ಆಕರ್ಷಿಸಿತು. ವಿದ್ಯಾರ್ಥಿಗಳು ದೇವರ ಭಜನೆ ಹಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ