ಬೀದಿಗಿಳಿದ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?ಬೀದಿಗಿಳಿದ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?

ಬುಧವಾರ, 26 ಡಿಸೆಂಬರ್ 2018 (19:30 IST)
ಮಂಗಳಮುಖಿಯರೆಲ್ಲ ಸೇರಿ ಏಕಾಏಕಿಯಾಗಿ ಬೀದಿಗೆ ಇಳಿದಿದ್ದರು.

ಮಂಗಳಮುಖಿಯರಿಂದ ಪ್ರತಿಭಟನೆ ನಡೆದಿದೆ. ಟ್ರಾನ್ಸ್ ಜೆಂಡರ್ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮಂಗಳಮುಖಿಯರು, ಸರ್ಕಾರ ಕೂಡಲೇ ಟ್ರಾನ್ಸ್ ಜೆಂಡರ್ ಕಾಯ್ದೆ ರದ್ದುಪಡಿಸಬೇಕೆಂದು ಒತ್ತಾಯ ಮಾಡಿದರು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಗಳಮುಖಿಯರು, ತಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹ ಮಾಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ