ಕಾಂಗ್ರೆಸ್ ಪ್ರತಿಭಟನೆಗೆ ವೇದಿಕೆ ಸಿದ್ದ ಆದ್ರೆ ಮಳೆಯಿಂದ ಪ್ರತಿಭಟನೆ ನಡೆಯೋದು ಡೌಟ್

ಮಂಗಳವಾರ, 20 ಜೂನ್ 2023 (13:58 IST)
ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದಲೇ ಇಂದು ಪ್ರತಿಭಟನೆ ನಡೆಯಲಿದೆ.ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಹಿನ್ನೆಲೆ ಪ್ರತಿಭಟನೆ ಮಾಡಲಾಗ್ತಿದೆ.ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ವೇದಿಕೆ ಸಿದ್ದಪಡಿಸಲಾಗುತ್ತಿದೆ.11.30ಕ್ಕೆ ಫ್ರಿಡಂ ಪಾರ್ಕ್ ನಲ್ಲಿ  ಪ್ರತಿಭಟನೆ ನಡೆಯಲಿದೆ.
 
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಪ್ರತಿಭಟನೆ ನಡೆಯಲಿದ್ದು,ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು,ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.
 
ಆದ್ರೆ ಬೆಂಗಳೂರಲ್ಲಿ ಜೋರಾದ ಮಳೆರಾಯನ ಆರ್ಭಟದಿಂದ ಕಾಂಗ್ರೆಸ್ ಪ್ರತಿಭಟನೆಗೆ ಮಳೆ ಅಡ್ಡಿಯಾಗಿದೆ.ಫ್ರಿಡಂ ಪಾರ್ಕ್ ನಲ್ಲಿ ಹಾಕಿದ್ದ ಶಾಮಿಯಾನ, ವೇದಿಕೆ, ಚೇರ್ ಎಲ್ಲವೂ ಮಳೆ ನೀರಿನಿಂದ ಸಂಪೂರ್ಣ ಒದ್ದೆಯಾಗಿದ್ದು,ಹೀಗೆ ಮಳೆ ಮುಂದುವರಿದ್ರೆ ಪ್ರತಿಭಟನೆ ನಡೆಯೋದೆ ಅನುಮಾನವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ