ವಿಧಾನ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪೋಟೊಗೆ ಅವಮಾನ

ಸೋಮವಾರ, 1 ಜನವರಿ 2018 (12:38 IST)
ಬೆಂಗಳೂರು : ಬೆಂಗಳೂರಿನ ವಿಧಾನ ಸೌಧದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹ ಘಟನೆ ನಡೆದಿದೆ.


ವಿಧಾನ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ಅನಾಥವಾಗಿ ಬಿದ್ದಿದ್ದು, ಅಧಿಕಾರಿಗಳ ಹಾಗು ಸಿಬ್ಬಂದಿಗಳ ನಿರ್ಲಕ್ಷದಿಂದ ಈ ರೀತಿಯಾಗಿದೆ ಎಂದು ತಿಳಿದುಬಂದಿದೆ.

 
ವಿಧಾನ ಸೌಧದ ಕಾಂಪೌಂಡ್ ನ ಪಕ್ಕದಲ್ಲಿ ಹಳೆ ಟಾರ್ಪಲ್ ಕವರ್ಗಳ ಜೊತೆಗೆ ಈ ಫೋಟೋವನ್ನು ಎಸೆಯಲಾಗಿತ್ತು. ಕೊಠಡಿಗಳ ನವೀಕರಣ ಮಾಡುವ ಸಂದರ್ಭದಲ್ಲಿ ಈ ರೀತಿಯಾಗಿದ್ದು,ಈ ಫೋಟೋ ವನ್ನು ಒಂದು ಕಡೆ ನಿಟ್ಟಾಗಿ ಇಡುವ ಬದಲು ಬೇಕಾಬಿಟ್ಟಿ ಎಸೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ