ರಾಜ್ಯದಲ್ಲಿ ಹೆಚ್ಚಿದ ಮಳೆ ಕೊರತೆ ಹಿನ್ನೆಲೆ ಕಬ್ಬು ಬೆಳೆ ಕುಂಠಿತ

ಭಾನುವಾರ, 27 ಆಗಸ್ಟ್ 2023 (19:11 IST)
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಕೆಂಪು ಸುಂದರಿಯ ಆಟ ಆಗಿತ್ತು. ಇದೀಗ ಅವಳ ಹವಾ ಕಡಿಮೆಯಾಗಿದ್ದೆ ತಡ ಇನ್ನೆಲ್ಲವೂ ದುಬಾರಿಯಾಗ್ತಾಯಿದೆ. ದುಬಾರಿ ದುನಿಯಾದಲ್ಲಿ ದಿನಕ್ಕೊಂದು ಬೆಲೆ ಹೈಕ್ ಆಗ್ತಿದೆ. ಇದೀಗ ಜನರಿಗೆ ಶಾಕ್​ ಕೊಟ್ಟಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಎಲ್ಲದರ ಬೆಲೆ ಏರುತ್ತಾ ಹೋಗುತ್ತಿದೆ.. ಈ ಹಿಂದೆ ಕೆಂಪು ಸುಂದರಿ ಬೆಲೆ ದಿಢೀರ್ ಎಂದು ಹೆಚ್ಚಾಗಿ ಸಾರ್ವಜನಿಕರಿಗೆ‌ ಅಘಾತ ತಂದಿತ್ತು.. ಈಗ ಅಗತ್ಯ ವಸ್ತುಗಳ ಬೆಲೆ ಸಹ ಒಂದೇ ಬಾರಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗುತ್ತಿದೆ. ಕಳೆದ ಎರಡು ತಿಂಗಳಿಂದ ಒಂದೊಂದೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಟೊಮೆಟೊ... ಈರುಳ್ಳಿ..ಹೂ..ಹಣ್ಣು ಆಯ್ತು ಈಗ ದಿನಸಿ ಮೇಲೆ‌ ಪೆಟ್ಟು ಬಿದ್ದಿದೆ... ಈಗ ಸಕ್ಕರೆ... ಬೇಳೆ ಸರದಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ