ಚುನಾವಣೆ ಇಫೆಕ್ಟ್: ರಾಜ್ಯದ ಉಸ್ತುವಾರಿ ಇನ್ನು ಬಿಜೆಪಿ ಬಿಗ್ ಬಿಗೆ?

ಬುಧವಾರ, 28 ಜೂನ್ 2017 (09:32 IST)
ನವದೆಹಲಿ: 2018 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಉಸ್ತುವಾರಿ ಹೊಣೆಯನ್ನು ಬಿಜೆಪಿ ಹಿರಿಯ ತಲೆ ಅರುಣ್ ಜೇಟ್ಲಿಗೆ ಹೊರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

 
ಚಾಣಾಕ್ಷ್ಯ ರಾಜಕಾರಣಿ ಎಂದೇ ಹೆಸರು ಮಾಡಿರುವ ಜೇಟ್ಲಿಯನ್ನು ರಾಜ್ಯದ ಚುನಾವಣೆ ಹೊರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಹಾದಿ ಇತರ ರಾಜ್ಯಗಳಷ್ಟು ಸುಲಭವಾಗಿಲ್ಲ. ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಮೇಲೆ ಜನರು ಸಂಪೂರ್ಣ ವಿಶ್ವಾಸ ಕಳೆದುಕೊಂಡಿಲ್ಲ.

ಅತ್ತ ಜೆಡಿಎಸ್ ಕೂಡಾ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಹೀಗಾಗಿ ಒಳಜಗಳಗಳ ಬೇಗುದಿಯಲ್ಲಿ ಬೇಯುತ್ತಿರುವ ಬಿಜೆಪಿಗೆ ಚೈತನ್ಯ ಒದಗಿಸಲು ಅರುಣ್ ಜೇಟ್ಲಿ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದಕ್ಕೀಗ ಪ್ರಧಾನಿ ಮೋದಿ ಒಪ್ಪಿಗೆಯೊಂದು ಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ