ಮದುವೆಗೂ ಮುನ್ನವೇ ಮಸಣ ಸೇರಿದ ವಧುವರ; ಅಷ್ಟಕ್ಕೂ ಆದದ್ದೇನು?

ಗುರುವಾರ, 16 ಫೆಬ್ರವರಿ 2017 (09:39 IST)
ಮದುವೆಯಾಗಿ ಹೊಸಜೀವನದ ಹೊಂಗನಸನ್ನು ಕಾಣುತ್ತಿದ್ದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಜತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವಕನು ಸಹ ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೃತರನ್ನು ನಾಗುರಿಯ ಕೃಷ್ಣ ಎಂಬುವವರ ಪುತ್ರಿ ನಂದಿತಾ  ಜತೆ ಕೇರಳದ ಕಾಸರಗೋಡಿನ ಚಂದ್ರಶೇಖರ್ ಮದುವೆ ನಿಶ್ಚಯವಾಗಿತ್ತು, ಫೆಬ್ರವರಿ 13ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೆ ಐದು ದಿನ ಮೊದಲು ನಂದಿತಾ ನೇಣಿಗೆ ಶರಣಾಗಿದ್ದಳು. ತಾನು ಸಲಿಂಗಕಾಮಿ, ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಚಂದ್ರಶೇಖರ್ ಹೇಳಿದ್ದು ಇದರಿಂದ ಆಘಾತಕ್ಕೊಳಗಾದ ನಂದಿತಾ ಸಾವಿನ ನಿರ್ಧಾರ ತಳೆದಳು ಎಂಬುದು ತನಿಖೆಯಿಂದ ಹೊರಬಿದ್ದಿತ್ತು. 
 
ಹೀಗಾಗಿ ಚಂದ್ರಶೇಖರ್ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
 
ಆದರೆ ಫೆಬ್ರವರಿ 14ರಂದು ಮನೆಯಿಂದ ಹೊರಹೋದ ಚಂದ್ರಶೇಖರ್ ಹಿಂತಿರುಗಿರಲಿಲ್ಲ. ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ