ಈಶ್ವರಪ್ಪಗೆ ಗಂಡಸ್ತನದ ಬಗ್ಗೆ ಗೊತ್ತಿಲ್ಲ ಎಂದ ಸಂಸದ

ಬುಧವಾರ, 15 ಮೇ 2019 (14:48 IST)
ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪಗೆ ಕೈ ಪಡೆಯ ಸಂಸದ ಖಡಕ್ ಟಾಂಗ್ ನೀಡಿದ್ದಾರೆ.

ನರ ಎಂದರೆ ಯಾವುದು? ಗಂಡಸ್ತನ ಎಂದರೆ ಏನು ಎನ್ನುವುದರ ಕುರಿತು ಅರಿವೇ ಕೆ.ಎಸ್.ಈಶ್ವರಪ್ಪಗೆ ಇಲ್ಲ. ಹೀಗಂತ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನವರು ನರಸತ್ತವರು ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಈಶ್ವರಪ್ಪಗೆ ನರ, ಗಂಡಸ್ತನದ ಬಗ್ಗೆ ಈವರೆಗೂ ತಿಳಿದಿಲ್ಲ. ಅವರು ಯಾವತ್ತೂ ಒಳ್ಳೆಯದನ್ನು ಮಾಡಿಲ್ಲ. ಮಾತನಾಡಿಲ್ಲ ಎಂದು ಛೇಡಿಸಿದ್ರು.

ಈಶ್ವರಪ್ಪರನ್ನು ಮಾಜಿ ಸಿಎಂ ಹೇಳಿದಂತೆ ಆಸ್ಪತ್ರೆಗೆ ದಾಖಲು ಮಾಡಬೇಕು. ಅವರ ಮೆದುಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಕುಂದಗೋಳದಲ್ಲಿ ಗೆಲುವುದು ಕೈ ವಶವಾಗಲಿದೆ ಎಂದ ಅವರು, ಬಿಜೆಪಿಯವರಿಗೆ ಮುಖದ ಮೇಲೆ ಹೊಡೆಯುವಂತೆ ಕೆಲಸ ಮಾಡಿ ತೋರಿಸಬೇಕೆಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ