ತಂದೆ-ಮಗಳ ದಾರುಣ ಸಾವು; ಕಾರಣ ಶಾಕಿಂಗ್

ಬುಧವಾರ, 12 ಜೂನ್ 2019 (20:21 IST)
ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ತಮ್ಮದೇ ತೋಟವೊಂದರಲ್ಲಿ ಹುಲ್ಲು ಕತ್ತರಿಸಲು ಹೋಗಿದ್ದ ತಂದೆ-ಮಗಳು ಮಳೆಯ ಸಂದರ್ಭದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಗಳೂರಿನ ಬಂಟ್ವಾಳದ ಪಿಲಿಮೊಗ್ರು ಗ್ರಾಮದ ಬಾರೆಕ್ಕಿನಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೃಷಿಕ ಗೋಪಾಲಕೃಷ್ಣ(65) ಮತ್ತು ಅವರ ಪುತ್ರಿ ದಿವ್ಯಶ್ರೀ (29) ಸಾವನ್ನಪ್ಪಿದ್ದಾರೆ.

ದನಗಳಿಗೆ ಹುಲ್ಲು ಹಾಕಲು ಹುಲ್ಲು ತರಲೆಂದು ತೋಟಕ್ಕೆ ತಂದೆ-ಮಗಳು ತೆರಳಿದ್ದರು. ಈ ವೇಳೆ ಮಳೆ ಬಂದಿದೆ. ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಕಡಿದು ಬಿದ್ದಿದೆ. ಆದರೆ ಇದನ್ನು ಗಮನಿಸದೇ  ತುಳಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ