ಮಗನ ಹುಟ್ಟುಹಬ್ಬದಂದೇ ಸಾವನ್ನಪ್ಪಿದ ತಂದೆ…!

ಮಂಗಳವಾರ, 18 ಡಿಸೆಂಬರ್ 2018 (17:28 IST)
ಪುತ್ರನ ಜನ್ಮದಿನಾಚರಣೆಗಾಗಿ ಕೇಕ್ ತರಲು ಹೋಗಿದ್ದ ತಂದೆಯೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ವಾಡಿ ಎಸಿಸಿ ಘಟಕದ ಜಾಕ್ ವೆಲ್ ಹತ್ತಿರ ಈ ದುರ್ಘಟನೆ ಸಂಭವಿಸಿದೆ. ತನ್ನ ಪುತ್ರನ ಪ್ರಥಮ ಹುಟ್ಟುಹಬ್ಬವನ್ನು ಸಡಗರದಿಂದ ಆಚರಣೆ ಮಾಡಬೇಕು ಎಂದುಕೊಂಡಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಕೇಕ್ ತರಲು ಬೈಕ್ ಮೇಲೆ ಹೋಗಿದ್ದ ಮರೆಪ್ಪ ಪೂಜಾರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಬೈಕ್ ಹಿಂಬದಿ ಸವಾರ ಬಾಲೇಶ್ ಪೂಜಾರಿಯೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಪುತ್ರನ ಜನ್ಮದಿನದಂದೇ ತಂದೆ ಮೃತಪಟ್ಟಿರುವ ಸುದ್ದಿ ಕುಟುಂಬದವರಿಗೆ ಬರಸಿಡಿಲಿನಂತೆ ಬಡಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ