ಕಾವೇರಿ ಹೋರಾಟಕ್ಕೆ ಚಿತ್ರರಂಗ ಸದಾ ಬದ್ಧ : ಸುದೀಪ್ ಟ್ವೀಟ್

ಬುಧವಾರ, 7 ಸೆಪ್ಟಂಬರ್ 2016 (18:51 IST)
ಕನ್ನಡ ಚಿತ್ರರಂಗ ಜನಪರ ಹೋರಾಟ ಮಾಡಲು ಹಿಂಜರಿಯುವುದಿಲ್ಲ ರಾಜ್ಯದ ಜನರ ಹಕ್ಕಿನ ಹೋರಾಟಕ್ಕೆ ಚಿತ್ರರಂಗ ಸದಾ ಬದ್ಧ ಎಂದು ಕಿಚ್ಚಾ ಸುದೀಪ್ ಟ್ವೀಟ್ ಮಾಡಿದ್ದಾರೆ. 
 
ಇಂದು ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ ಅವರು, ಚಿತ್ರರಂಗ ಸದಾ ರಾಜ್ಯದ ಜನಪರ ಹೋರಾಟಕ್ಕೆ ಸಿದ್ದವಿದೆ ಎಂದು ಘೋಷಿಸಿದ್ದಾರೆ.
 
ಕಾವೇರಿ ವಿವಾದದಲ್ಲಿ ಸಂಪೂರ್ಣ ಚಿತ್ರರಂಗ ಕಾವೇರಿ ಕಣಿವೆಯ ಜನತೆಗಿದೆ. ಚಿತ್ರರಂಗ ಸದಾ ಜನಪರ ಹೋರಾಟಕ್ಕೆ ಮುಂದಿದೆ ಎಂದು ತಿಳಿಸಿದ್ದಾರೆ.
 
ಕಾವೇರಿ ಹೋರಾಟದಲ್ಲಿ ಚಿತ್ರನಟರು ಪಾಲ್ಗೊಳ್ಳುತ್ತಿಲ್ಲ ಎನ್ನುವ ಅನುಮಾನ ಬೇಡ. ನಾವೆಲ್ಲರು ಮಂಡ್ಯ ಜಿಲ್ಲೆಯ ರೈತರೊಂದಿಗಿದ್ದೇವೆ ಎಂದು ಕಿಚ್ಚಾ ಸುದೀಪ್ ಭರವಸೆ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ