ತಾಂತ್ರಿಕ ದೋಷವಿದ್ದ ವಿಮಾನದಲ್ಲೇ ದೆಹಲಿಗೆ ಹಾರಿದ ಸಚಿವ ಅನಂತ ಕುಮಾರ್

ಶುಕ್ರವಾರ, 23 ಮಾರ್ಚ್ 2018 (09:43 IST)
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಕೇಂದ್ರ ಸಚಿವ ಅನಂತ ಕುಮಾರ್ ಸೇರಿದಂತೆ ಹಲವು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಬೆಳಿಗ್ಗೆ 7 ಗಂಟೆ ಸುಮಾರಿಗೆ ತೆರಳಬೇಕಿದ್ದ ಜೆಟ್ ಏರ್ ವೇಸ್ ವಿಮಾನ ತಾಂತ್ರಿಕ ದೋಷದ ಹಿನ್ನಲೆಯಲ್ಲಿ 50 ನಿಮಿಷ ತಡವಾಗಿ ತೆರಳಿದೆ. ರನ್ ವೇಗೆ ಬರುವ ಮೊದಲೇ ತಾಂತ್ರಿಕ ದೋಷ ಕಂಡುಬಂದಿದೆ.

ವಿಶೇಷವೆಂದರೆ ಈ ವಿಮಾನದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಪ್ರಯಾಣಿಸಿದ್ದರು. ತಾಂತ್ರಿಕ ದೋಷ ಪರಿಹಾರವಾದ ಬಳಿಕ ಸಚಿವರು ಸೇರಿದಂತೆ ಪ್ರಯಾಣಿಕರು ವಿಮಾನವೇರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ