ಕುಮಾರಸ್ವಾಮಿಗೆ ಇನ್ನು ಸ್ವಲ್ಪದಿನ ಅವಕಾಶ ಕೊಡಬೇಕೆಂದ ಗಾಲಿ ಜನಾರ್ಧನ ರೆಡ್ಡಿ!

ಶನಿವಾರ, 1 ಸೆಪ್ಟಂಬರ್ 2018 (17:30 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ನೂರು ದಿನ ಪೂರೈಕೆ ಮಾಡಿದೆ. ಜನ ಅವರ ಅಧಿಕಾರ ಶೈಲಿಯನ್ನು ನೋಡುತ್ತಿದ್ದಾರೆ. ಇನ್ನು ಸ್ವಲ್ಪ ದಿನಗಳ ಕಾಲ ಅವಕಾಶ ಕೊಟ್ಟು ನೋಡೋಣ. ಹೀಗಂತ ಮಾಜಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು, ಕಳೆದ ಚುನಾವಣೆಯಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾರಣಾಂತರಗಳಿಂದ ಅಧಿಕಾರ ಕೈ ತಪ್ಪಿದೆ. ಮುಂದೆ ಕಾಲವೇ ಇದಕ್ಕೆ ಉತ್ತರ ನೀಡಲಿದೆ ಅಂತ ಭವಿಷ್ಯ ನುಡಿದರು. ಅಲ್ಲದೇ ಬಿಜೆಪಿಯಲ್ಲಿ ನಾನು ಸಂಪೂರ್ಣ ಸಕ್ರಿಯವಾಗಿ ಇದ್ದೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬುದು ಜನರ ನಿರೀಕ್ಷೆ ಇದೆ ಎಂದೂ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ