ಸಾರ್ವಜನಿಕರಿಗೆ ಇರಿಯುತ್ತಿದ್ದ ವೇಳೆ ತಡೆಯಲು ಬಂದ ಪೊಲೀಸ್ ಪೇದೆಯೊಬ್ಬರಿಗೂ ಇರಿದಿದ್ದಾನೆ. ಟಮಕ ನಿವಾಸಿ ಶ್ರೀನಿವಾಸ್, ಕೀಲುಕೋಟೆಯ ವೆಂಕಟೇಶಪ್ಪ ಎಂಬುವವರಿಗೂ ಚಾಕುವಿನಿಂದ ಇರಿದಿದ್ದಾನೆ. ಈತನಿಂದ ಒಟ್ಟು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರು ಕೋಲಾರ ಜಿಲ್ಲಾಸ್ಪತ್ರೆ ಮತ್ತು ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.