ಶಾಸಕರ ಗೆಲುವಿಗಾಗಿ ದೇವರ ಮೊರೆ

ಶನಿವಾರ, 15 ಏಪ್ರಿಲ್ 2023 (16:03 IST)
ವಿಜಯಪುರದಲ್ಲಿ ರಾಜಕೀಯ ರಂಗೇರಿದ್ದು, ಶಾಸಕರ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.. ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಶಿವಾನಂದ ಪಾಟೀಲ ಗೆಲುವು ಸಾಧಿಸುವಂತೆ ಪ್ರಾರ್ಥಿಸಿ ಅಭಿಮಾನಿಗಳು ದೀಡ್ ನಮಸ್ಕಾರ ಹಾಕಿದ್ದಾರೆ.. ತಾಲೂಕಿನ ಟಕ್ಕಳಕಿ ಗ್ರಾಮದಿಂದ ನಂದೀಶ್ವರ ದೇವಸ್ಥಾನದವರೆಗೆ ದೀಡ್​ ನಮಸ್ಕಾರ ಹಾಕಿ ಹರಕೆ ಹೊತ್ತಿದ್ದಾರೆ.. ಸುಮಾರು 16 ಜನ ಅಭಿಮಾನಿಗಳಿಂದ ದೀಡ್ ನಮಸ್ಕಾರ ಹಾಕಿದ್ದು, ಹಲಗೆ ಮೆರವಣೆಗೆಯೊಂದಿಗೆ ಆಗಮಿಸಿದ್ದಾರೆ.. ಅಭಿಮಾನಿಗಳು ಶಾಸಕರಿಗೆ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ