‘ಅನೈತಿಕ ಸಂಬಂಧ ಹಳಸಿದ್ದಕ್ಕೆ ಸರಕಾರ ಬೀಳುತ್ತಿದೆ’

ಶನಿವಾರ, 6 ಜುಲೈ 2019 (17:55 IST)

ಕಾಂಗ್ರೆಸ್- ಜೆಡಿಎಸ್ ಅನೈತಿಕ ಸಂಬಂಧ ಮಾಡಿಕೊಂಡು ಸರಕಾರ ರಚನೆ ಮಾಡಿದ್ದವು. ಆ ಸಂಬಂಧ ಹಳಿಸಿದ ಕಾರಣದಿಂದ ಸರಕಾರ ಬಿದ್ದು ಹೋಗುತ್ತಿದೆ. ಹೀಗಂತ ಕಮಲ ಪಾಳೆಯದ ಶಾಸಕ ವ್ಯಂಗ್ಯವಾಡಿದ್ರು.

ಬೆಳಗಾವಿಯಲ್ಲಿ ಹುಕ್ಕೇರಿ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ಮಾತನಾಡಿದ್ದು, ಮೈತ್ರಿ ಸರಕಾರದ ನಡೆಯಿಂದ ಅಸಮಧಾನಗೊಂಡು ಬೇಸತ್ತ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಆಪರೇಷನ್ ಕಮಲ ಮಾಡಲು ನಾವು ಯಾವುದೇ ರೀತಿಯಲ್ಲಿ ಪ್ರಯತ್ನ ನಡೆಸಿಲ್ಲ ಎಂದ್ರು.

ಬಿ.ಎಸ್.ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಮೈತ್ರಿ ಸರಕಾರ ಪತನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ದೂರಿದ್ರು.

ಅಮೆರಿಕಾದಿಂದ ವಾಪಸ್ ಬರುತ್ತಿರೋ ಮುಖ್ಯಮಂತ್ರಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕತ್ತಿ ಆಗ್ರಹಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ