ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ- ಬಿ ಸಿ ಪಾಟೀಲ್

ಸೋಮವಾರ, 18 ಡಿಸೆಂಬರ್ 2023 (16:02 IST)
ಎತ್ತಿನ ಹೊಳೆ ಪ್ರಾಜೆಕ್ಟ್ ವಿಳಂಭ ವಿಚಾರವಾಗಿ ಮಾಜಿ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯಿಸಿದ್ದು,ಈ ಸರ್ಕಾರ ಯಾವುದಕ್ಕೂ ಹಣ ಕೊಡ್ತಿಲ್ಲ.ಆ ಭಾಗ್ಯಕ್ಕಾದ್ರೂ ಹಣ ಕೊಟ್ರಾ, ಅದೂ ಇಲ್ಲ.ಗೃಹಲಕ್ಷ್ಮಿ ಯೋಜನೆಗೆ ಹಣ ಕೊಡಲಿಲ್ಲ.ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ.ಇದ್ದ ಯೋಜನೆ ಸ್ಥಗಿತಗೊಳಿಸಿದ್ದಾರೆ.ನಮ್ಮ ಸರ್ಕಾರದಲ್ಲಿ ಕೊಟ್ಟ ಯೋಜನೆ ಹಣವನ್ನೂ ವಾಪಸ್ ಪಡೆದಿದ್ದಾರೆ.ಈ ಸರ್ಕಾರದಲ್ಲಿ ಹಣವೂ ಇಲ್ಲ, ಅಭಿವೃದ್ಧಿ ಕೂಡ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
 
ಇನ್ನೂ ಸೋಮಶೇಖರ್ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕ ಇರುವ ವಿಚಾರವಾಗಿ ಬಿಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.ಎಸ್ ಟಿ ಸೋಮಶೇಖರ್ ಹೋಗೋದು ಬಿಡೋದು ಅವರಿಗೆ ಬಿಟ್ಟ ವಿಚಾರ.ಒಂದ್ ಪಕ್ಷದಲ್ಲಿ ಆಯ್ಕೆಯಾದ ಮೇಲೆ ಆ ಪಕ್ಷಕ್ಕೆ ನಾವು ಬದ್ಧರಾಗಿಬೇಕು.ಹಿಂದೆ ನಾವು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇವೆ ಹೀಗಾಗಿ ಈ ಪಕ್ಷದಲ್ಲಿ ಗೆದ್ದು ಆ ಪಕ್ಷದವರ ಜೊತೆ ಓಡಾಡೋದು ಸರಿಯಲ್ಲ .ಇದು ಬಿಜೆಪಿಗೂ ಸಹ ಮುಜುಗರ ಉಂಟು ಮಾಡುತ್ತದೆ.ಅವರು ಏನೇ ನಿರ್ಧಾರ ತೆಗೆದುಕೊಂಡರು ಆದಷ್ಟು ಬೇಗ ತೆಗೆದುಕೊಂಡು ಒಳ್ಳೆಯದು.ಈ ಸರ್ಕಾರ ಯಾವುದಕ್ಕೂ ಹಣ ಕೊಡ್ತಿಲ್ಲ.ಆ ಭಾಗ್ಯಕ್ಕಾದ್ರೂ ಹಣ ಕೊಟ್ರಾ, ಅದೂ ಇಲ್ಲ.ಗೃಹಲಕ್ಷ್ಮಿ ಯೋಜನೆಗೆ ಹಣ ಕೊಡಲಿಲ್ಲ.ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ.ಇದ್ದ ಯೋಜನೆ ಸ್ಥಗಿತಗೊಳಿಸಿದ್ದಾರೆ.ನಮ್ಮ ಸರ್ಕಾರದಲ್ಲಿ ಕೊಟ್ಟ ಯೋಜನೆ ಹಣವನ್ನೂ ವಾಪಸ್ ಪಡೆದಿದ್ದಾರೆ.ಈ ಸರ್ಕಾರದಲ್ಲಿ ಹಣವೂ ಇಲ್ಲ, ಅಭಿವೃದ್ಧಿ ಕೂಡ ಸಾಧ್ಯವಿಲ್ಲ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ