ಎಚ್‌ಡಿಕೆ ರಾಜಕೀಯವಾಗಿ ಬೀದಿಗೆ ಬರದಿದ್ರೆ ಹೆಸರು ಬದಲಿಸಿಕೊಳ್ತಿನಿ: ಎಚ್.ಸಿ.ಬಾಲಕೃಷ್ಣ

ಶುಕ್ರವಾರ, 14 ಏಪ್ರಿಲ್ 2017 (15:59 IST)
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜಕೀಯವಾಗಿ ಬೀದಿಗೆ ಬರದಿದ್ರೆ ಹೆಸರು ಬದಲಿಸಿಕೊಳ್ತಿನಿ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲ್ ಹಾಕಿದ್ದಾರೆ.
 
ನಗರದಲ್ಲಿ ಆಯೋಜಿಸಲಾದ ಚಲುವರಾಯ ಸ್ವಾಮಿ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ರಾಜ್ಯವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ಆದರೆ, ದೇವೇಗೌಡರಿಗೆ ನಮ್ಮ ನಿಲುವು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯುವುದು ಮತ್ತು ಮುಖ್ಯಮಂತ್ರಿಯಾಗುವುದು ಅವರ ಮನೆಯವರಿಗೆ ಇಷ್ಟವಿಲ್ಲ. ಮನೆಯವರ ಮಾತು ಕೇಳುವುದನ್ನು ಕುಮಾರಸ್ವಾಮಿ ಮುಂದವರಿದಿದ್ದೇ ಆದಲ್ಲಿ ರಾಜಕೀಯವಾಗಿ ಬೀದಿಗೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ,
 
ಇದೀಗ ಕುಮಾರಸ್ವಾಮಿ ಮತ್ತು ದೇವೇಗೌಡರು ನಮ್ಮನ್ನು ದೂರವಿಡುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಅವರು ಹೇಳಿದಂತೆ ಕೇಳಿದ್ದೇವೆ. ಅವರ ಮಾತನ್ನು ಯಾವತ್ತೂ ಮೀರಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ