ಯಡಿಯೂರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಹೆಚ್.ವಿಶ್ವನಾಥ್

ಗುರುವಾರ, 30 ಜನವರಿ 2020 (14:28 IST)

ಮೈತ್ರಿ ಸರಕಾರದಲ್ಲಿ 17 ಜನರು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಸರಕಾರ ಬಂದಿದೆ. ಇದನ್ನು ಸಿಎಂ ನೆನಪಿಟ್ಟುಕೊಳ್ಳಬೇಕು ಅಂತ ಹೆಚ್.ವಿಶ್ವನಾಥ್ ಮತ್ತೊಮ್ಮೆ ಗುಡುಗಿದ್ದಾರೆ.
 

ಸೋತವರಿಗೆ ಸಚಿವ ಸ್ಥಾನ ಇಲ್ಲ ಅನ್ನೋ ಮಾತನ್ನು ಎಲ್ಲೋ ಹೋಗಿ ಸುಧಾಕರ, ಸೋಮಶೇಖರ್ ಹೇಳಿಸಿಕೊಂಡು ಬಂದಿದ್ದಾರೆ ಅಂತ ಟಾಂಗ್ ನೀಡಿದ್ದಾರೆ.ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಶುರುವಾಗಿರೋವಾಗಲೇ ಹೆಚ್.ವಿಶ್ವನಾಥ್, ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಸುಧಾಕರ್, ಎಸ್.ಟಿ.ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು ರಾಜೀನಾಮೆ ನೀಡಿ ಹೋರಾಟ ಮಾಡಿದ್ದೇವೆ. ಆದರೆ ಮಾರಾಟ ಆಗಿಲ್ಲ. ನಮಗೆ ಗೌರವ ಕೊಡಲೇಬೇಕು ಅಂತ ಸಿಎಂಗೆ ಹೆಚ್.ವಿಶ್ವನಾಥ್ ಆಗ್ರಹ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ